ಹುಬ್ಬಳ್ಳಿ: ಬುಧವಾರ ಹುಬ್ಬಳ್ಳಿ ವಾರ್ಡ್ ನಂ 53(65) ಸಿದ್ದವೀರಪ್ಪನಪೇಟೆ ಟುಮಕೂರು ಯಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಎದುರುಗಡೆ ಎರಡು ದಿನಗಳಿಂದ ಸತತ ಮಳೆಯಿಂದ ಗಜಾನನ ಗಂಗಾಧರ ಸಾ ಮಿಸ್ಕಿನ್ ರವರ ಮನೆಯ ಗೋಡೆ ಕುಸಿದು ಸಾಕಷ್ಟು ಹಾನಿ ಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳನ್ನು ಈ ವಿಷಯ ಗಮನಕ್ಕೆ ತಂದು ಕೂಡಲೇ ಪರಿಹಾರ ಮಾಡಬೇಕೆಂದು ಎಸ್ ಎಸ್ ಕೆ ಬ್ಯಾಂಕಿನ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಬುರುಬುರೆ ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದವೀರಪ್ಪನಪೇಟೆ ಟುಮಕೂರ ಓಣಿ ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.